Showing posts with label near bangalore. Show all posts
Showing posts with label near bangalore. Show all posts

Sunday, December 11, 2011

Bangalore: GaviGangadareshwara Temple


ಗವಿ ಗಂಗಾಧರೇಶ್ವರ ದೇಗುಲ

ಲೇಕಖಿ : ರಜನಿ
ಫೋಟೋಗ್ರಫಿ : ವಸಿಷ್ಠ 


ಬಹಳ ದಿನಗಳಿಂದ ಗವಿ ಗಂಗಾಧರೇಶ್ವರನ ದೇಗುಲಕ್ಕೆ ಹೋಗುವ ತುಡಿತವಿತ್ತು. ೨೭ ರ ಭಾನುವಾರ ಕಾಲ ಕೂಡಿಬಂತು. ಚುಮು ಚುಮು ಎಂದು ಕೊರೆಯುವ ಛಳಿಯಲ್ಲಿಸಂಜೆ ೭ ರ ಹೊತ್ತಿಗೆ ಬೆಚ್ಚಗೆ ಕಾರಿನಲ್ಲಿ ಕುಳಿತು ಹೊರಟೆವು. ಉತ್ತರಹಳ್ಳಿಯಿಂದ ಗವಿಪುರಂ ಕಡೆಗೆ. 

ಬಸವನಗುಡಿಯ ಒಂದು ಭಾಗ ಗವಿಪುರಂ ಬಡಾವಣೆ. ಅಲ್ಲಿಯೇ ಬಹಳ ಪ್ರಾಚೀನವಾದ ಸುಮಾರು ೯ನೇ ಶತಮಾನಕ್ಕೆ ಸೇರಿದ್ದು ಎನ್ನಲಾದ ಗವಿ ಗಂಗಾಧರೇಶ್ವರ ದೇವಾಲಯವಿದೆ. ಕೆ.ಆರ್ ಮಾರುಕಟ್ಟೆಗೆ ೪-೫ ಕಿ.ಮೀಟರ್ ದೂರದಲ್ಲಿದೆ.
ಒಂದು ಪ್ರತೀತಿಯೆಂದರೆ ಗೌತಮ ಮಹರ್ಷಿಗಳು ಇಲ್ಲಿರುವ ಗಂಗಾಧರೇಶ್ವರ ಲಿಂಗಕ್ಕೆ  ಮೂರು ಭಾರಿ ಅರ್ಘ್ಯ ಕೊಟ್ಟು ಪ್ರಾರ್ತಿಸಿದರು ಎಂದು. ಸಣ್ಣ ಬೆಟ್ಟದಗುಹೆ ಒಳಗೆ ಈಶ್ವರನ ಲಿಂಗವಿರುವುದರಿಂದ ಗವಿ ಗಂಗಧಾರೇಶ್ವರ ಎಂಬ ಹೆಸರು ಬಂದಿದೆ. ಸಮಮಟ್ಟವಾದ ದಿಬ್ಬ ಸ್ಥಳದಿಂದ ಮೆಟ್ಟಿಲು ಇಳಿದರೆ ನೇರ ಗುಹೆಯ ಒಳಗೆ ಇರುತ್ತೇವೆ. ದೇಗುಲದ ಮುಂದೆ ಎತ್ತರವಾದ ಕಲ್ಗಂಬ ಹಾಗೂ ಕಂಚಿನ ನಂದೀಕಂಬವಿದೆ. ದೇಗುಲದ ಮುಂದಿನ ಮಂಟಪದ ಕಂಬಗಳು ವಿಜಯನಗರದ ಅರಸರ ಶೈಲಿಯದಾಗಿದೆ. ಮತ್ತೊಂದು ಸಂಶೋಧನೆಯ ಅನ್ವಯ - ಮಂಟಪವನ್ನು ಸೂರ್ಯಪನ ಮತ್ತಿ ಚಂದ್ರಪನ ಎಂಬ ಎರಡು ಅಧಾರ ಸ್ಥಂಬಗಳಿಂದ ವಿನ್ಯಾಸಗೊಳಿಸಲಾಗಿದೆ. ಅದಕ್ಕೆ ಇರುವ ಅಧಾರ ಸ್ಥಂಬಗಳನ್ನು ವಿನ್ಯಾಸಗೊಳಿಸಿದ ರೀತಿಯು ಎರಡು ಬಸವಗಳು ಕುಳಿತಿರುವ ರೀತಿಯಲ್ಲಿದೆ. ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು. 

ಈ ದೇಗುಲದ ವಿಶೇಷವೇನೆಂದರೆ ಜನವರಿ ೧೪ ರಂದು ಬರುವ ಮಕರಸಂಕ್ರಾಂತಿಯಂದು ಸೂರ್ಯನ ಪ್ರಥಮ ಕಿರಣಗಳು ದಕ್ಷಿಣ ಪಶ್ಚಿಮದ ಕಿಟಕಿಗಳಿಂದ ತೂರಿಕೊಂಡು ನಂದಿಯ ಎರಡು ಕೊಂಬುಗಳ ಮಧ್ಯೆ ಹಾಯ್ದು ಲಿಂಗದ ಮೇಲೆ ಬೀಳುತ್ತದೆ. (ಸುಮಾರು ಹದಿನೈದು ನಿಮಿಷಗಳ ಕಾಲ ) ಆ ದೃಶ್ಯ ನೋಡಲು ಅಭೂತಪೂರ್ವವಾಗಿರುತ್ತದೆ. ನೂರಾರು ಜನ ಅಂದು ದೇಗುಲದಲ್ಲಿ ನೆರೆದು ಆ ಮನೋಹರ ದೃಶ್ಯವೈಶಿಷ್ಟ್ಯವನ್ನು ಕಣ್ಮನದಲ್ಲಿ ತುಂಬಿಕೊಳ್ಳಬಯಸುತ್ತಾರೆ. 


ಇತ್ತೀಚಿನ ಸಂಶೋಧನೆಯೆಂದರೆ ನವಂಬರ್ ೩೦ ಹಾಗೂ ಡಿಸಂಬರ್ ೧ ನೇ ದಿನಾಂಕದಂದೂ ಸಹ ಈ ದೃಶ್ಯ ನಮಗೆ ನೋಡಲು ಸಿಗುತ್ತದೆ ಎನ್ನುವುದು. ಗಂಗಾಧರೇಶ್ವರನ ಮುಂದಿನ ಅಕ್ಕ-ಪಕ್ಕಗಳ ಕಂಬಗಳ ಎಡಬಲಗಳಲ್ಲಿ ಕಪ್ಪು ಸಾಲಿಗ್ರಾಮ ಶಿಲೆಯಲ್ಲಿ ಗಣೇಶ ಮತ್ತು ಬಾಲ ಸುಬ್ರಹ್ಮಣ್ಯನ ಸುಂದರ ಶಿಲ್ಪಗಳು ಅರಳಿನಿಂತು ಭಕ್ತರ ಕಣ್ ಸೆಳೆಯುತ್ತವೆ. 


ಇನ್ನು ಈಶ್ವರನ ಬಲ ಭಾಗದಲ್ಲಿ ಗುಹೆಯ ಒಳಗೆ ಪೂರ್ಣ ಮೈಯನ್ನು ಬಗ್ಗಿಸಿ ನಡೆದರೆ ಮನಸೂರೆಗೊಳ್ಳುವ ಮೋಹಕ ನಗೆಯಿಂದ ಕೂಡಿ ಬೆಳಗುತ್ತಿರುವ ಆಳೆತ್ತರದ ಪಾರ್ವತಿ ಅಮ್ಮನ ಶಿಲಾಮೂರ್ತಿ ಇರುವುದು. ತಾಯಿ ಎಷ್ಟು ಪ್ರಸನ್ನವದನಳಾಗಿದ್ದಳೆಂದರೆ ದೇಗುಲಕ್ಕೆ ಗಂಗಾಧರೇಶ್ವರದೇಗುಲ ಎಂಬ ಹೆಸರಲ್ಲದೆ ಪ್ರಸನ್ನ ಪಾರ್ವತೀ ಪರಮೇಶ್ವ ದೇಗುಲ ಎಂಬ ಹೆಸರೂ ಪ್ರಸಿದ್ಧವಾಗಿದೆ. ನಗುತ್ತಿರುವ ಪಾರ್ವತೀ ಅಮ್ಮನನ್ನು ಮನತುಂಬಿಕೊಂಡು ಬಗ್ಗಿ ತಗ್ಗಿ ನಡೆಯುತ್ತಾ ಹೋದರೆ ಗೌತಮ ಹಾಗೂ ಭರದ್ವಾಜ ಮಹರ್ಷಿಗಳ ಮೂರ್ತಿಗಳು ಕಂಡುಬರುತ್ತವೆ. ಇನ್ನೂ ಒಳಗೆ ಹೋದರೆ ಸೌಮ್ಯದುರ್ಗಿಯು ಕಾಣಸಿಗುತ್ತಾಳೆ. ಅಲ್ಲದೆ ವಲ್ಲಭೆಯೊಡನೆ ಕುಳಿತಿರುವ ರುದ್ರದೇವ, ಶಕ್ತಿಗಣಪ ಮುಂತಾದ ಮೂರ್ತಿಗಳಿವೆ. ದೇಗುಲದ ಪ್ರಾರಂಭದ ಮಂಟಪದ ಬಲಭಾಗದಲ್ಲಿ ಆಚಿಜನೇಯ, ಲಕ್ಷ್ಮೀನಾರಾಯಣ, ಷಣ್ಮುಕ ಮುಂತಾದ ಬಹು ಸುಂದರವಾದ ಮೂರ್ತಿಗಳನ್ನು ಕೆತ್ತಿದ್ದಾರೆ. 


ಹೀಗೆ ಈ ದೇಗುಲದ ದರ್ಶನ ಮಾಡುತ್ತಾ ಹೋದಂತೆ ನಮ್ಮ ಮನವು ಭಕ್ತಿಪರವಶತೆಯಿಂದ ತುಂಬಿ ನಾವು ಪ್ರಸನ್ನವದನರಾಗಿ ಹೊರಬರುತ್ತೇವೆ ಎಂಬುದಂತೂ ನಿಜ.

Sunday, September 18, 2011

Rangasthala




ರಂಗಸ್ಥಳ
ಲೇಖಕಿ: ರಜನಿ
ಬರಹಕ್ಕೆ: ವಸಿಷ್ಠ

ಸೆಪ್ಟಂಬರ್ ನಾಲ್ಕನೇ ಭಾನುವಾರದಂದು ನಾನು, ನಮ್ಮೆಜಮಾನರು, ನನ್ನ ಮಗ, ಸೊಸೆ ಎಲ್ಲಾ ಒಟ್ಟಾಗಿ ಆಂದ್ರ ಕರ್ನಾಟಕದ ಸೀಮಾ ರೇಖೆಯಲ್ಲಿರುವ ಲೇಪಾಕ್ಷಿ ದೇವಸ್ಥಾನವನ್ನು ನೋಡಲು ಹೊರಟೆವು. 
ಚಿಕ್ಕಬಳ್ಳಾಪುರ ರಸ್ತೆಗೆ ಬಂದಾಗ ಇದ್ದಕಿದ್ದಂತೆ ನನ್ನ ಮಗ ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿನ ಕಡೆಗೆ ಕಾರನ್ನು ತಿರುಗಿಸಿದ.ನಮ್ಮವರು ಅಚ್ಚರಿಯಿಂದ ಕೂಗಿದರು, ಇದೇನೋ ಈ ಕಡೆಗೆ ಕಾರನ್ನು ತಿರುಗಿಸಿದೆ !! ಎಂದು.

ನಿಮಗೊಂದು ಅಚ್ಚರಿ ಕಾದಿದೆ ಎಂದವನೆ ಸ್ವಲ್ಪ ದೂರದಲ್ಲೆ ಒಂದು ಸುಂದರವಾದ ಪ್ರಾಚೀನವಾದ ದೇವಸ್ಥಾನದ ಮುಂದೆ ನಿಲ್ಲಿಸಿದ. ಈ ದೇವಸ್ಥಾನದ ಬಗ್ಗೆ ಅವನು ನೆಟ್ ನ ಸಹಾಯದಿಂದ ಮಾಹಿತಿ ಸಂಗ್ರಹಿಸಿದ್ದ. ನಮಗೆ ಯಾವುದೆ ಸುಳುಹು ಕೊಡದೆ ನಮ್ಮನ್ನು ಕರೆತಂದಿದ್ದ. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರಿನ ಕಡೆಗೆ ಹೋಗುವಾಗ ೩ಕಿ.ಮಿ. ದೂರದಲ್ಲೆ ರಂಗಸ್ಥಳ ಸಿಗುತ್ತದೆ.

ಪೌರಾಣಿಕ ಹಿನ್ನಲೆಯಾಗಿ ಒಂದು ಕಥೆಯಿದೆ. ಶ್ರೀರಾಮನ ಪಟ್ಟಾಭಿಷೇಕದ ಸಂದರ್ಭದಲ್ಲಿ, ಶ್ರೀರಾಮನು ವಿಭೀಷಣನಿಗೆ ಬೆತ್ತದ ಬುಟ್ಟಿಯಲ್ಲಿ ಶ್ರೀರಂಗನ ಮೂರ್ತಿಯನ್ನು ಇಟ್ಟುಕೊಟ್ಟು, ತಮಿಳುನಾಡಿನ ಶ್ರಿರಂಗಂನಲ್ಲಿ ಪ್ರತಿಷ್ಟಾಪಿಸಲು ತಿಳಿಸಿದ. ವಿಭೀಷಣನು ಅಂತೆಯೆ ಅದನ್ನು ಕೊಂಡೊಯ್ಯುತಿದ್ದ ಮಾರ್ಗದಲ್ಲಿ ಸಪ್ತಋಷಿಗಳು ಅವನನ್ನು ತಡೆದು ಈಗಿರುವ ಸ್ಥಳದಲ್ಲಿ (ರಂಗಸ್ಥಳದಲ್ಲಿ) ಭೂದೇವಿ ಹಾಗು ನೀಳಾದೇವಿ ಸಮೇತ ಸ್ವಾಮಿಯನ್ನು ಪ್ರತಿಷ್ಟಾಪಿಸಲು ಹೇಳಿದರು. ಈಗಲು ನಾವು ಗರ್ಭಗುಡಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಬೆತ್ತದ ಬುಟ್ಟಿಯ ಆಕಾರದಲ್ಲಿರುವುದು ಕಂಡುಬರುತ್ತದೆ. 
Bamboo Basket Base
Ranga of Saligramashile

ದೇವಸ್ಥಾನದ ವಿಶೆಷತೆಯೆಂದರೆ, ಶ್ರೀರಂಗಂನ ಈಗಿನ ಮೂರ್ತಿಯು, ಶ್ರೀರಂಗಪಟ್ಟನದಲ್ಲಿರುವ ಮೂರ್ತಿಯು ಹಾಗು ಇಲ್ಲಿರುವ ಶ್ರೀರಂಗ ಮೂರ್ತಿಯು ಒಂದೇ ದಿನ, ಒಂದೇ ಮುಹೂರ್ತದಲ್ಲಿ ಪ್ರತಿಷ್ಟಾಪಿಸಲ್ಪಟ್ಟಿದೆ. 

ಶ್ರೀರಂಗಮೂರ್ತಿಯು ಸಾಲಿಗ್ರಾಮ ಶಿಲೆಯಲ್ಲಿ ಕೆತ್ತಲ್ಪಟ್ಟಿದೆ. ಪಂಚಹೆಡೆಯ ಆದಿಶೇಶನ ಮೇಲೆ ಯೋಗನಿದ್ರೆಯಲ್ಲಿ ಮಲಗಿರುವ ಸ್ವಾಮಿಯು ಭೂ , ನೀಳಾ ಸಮೇತನಾಗಿದ್ದಾನೆ. ಕೆಳಗಡೆ ವೈನತೇಯನ ಮೂರ್ತಿಯು ಇದೆ. ಗರ್ಭಗುಡಿಯ ಎರಡೂ ಪಾರ್ಶ್ವಗಳಲ್ಲಿ ಆಳ್ವಾರ್ಗಳ ಸುಂದರ ಮೂರ್ತಿಗಳು ರಾರಾಜಿಸುತ್ತಿದೆ. 
ಕಮನೀಯವಾದ ಆಕಾರದಲ್ಲಿರುವ ಶ್ರೀರಂಗನಾಥನನ್ನು ನೋಡುತ್ತಿದ್ದರೆ ಮನದ ಕಂಗಳಿಗೆ ಹಬ್ಬದ ಔತಣವೇ ಸರಿ !
ಗರ್ಭಗುಡಿಯ ಹೊರಗೆಯಿರುವ ದೇವಸ್ಥಾನದ ಪ್ರಾಕಾರವು ಮನಮೋಹಕವಾದ ಶಿಲ್ಪ ಕೆತ್ತನೆಗಳಿಂದ ಕೂಡಿದ ಚಚ್ಚೌಕಾರದ ಕಂಬಗಳ ಆಧಾರದ ಮೇಲೆ ಕಟ್ಟಲ್ಪಟ್ಟಿದೆ. ಈ ವಾಸ್ತುಶಿಲ್ಪವು ವಿಜಯನಗರದ ಶೈಲಿಯಲ್ಲಿದೆ.
Entrance






Pillared Hall


Homes of the Archakars

Gopuram
Kalyani

ಪ್ರಾಕಾರದ ಒಳಗೆ ಸುತ್ತಲು ಅರ್ಚಕರ ಮನೆಗಳಿವೆ. 
ದೇವಸ್ಥಾನದ ಹೊರಗಿರುವ ಹಳೆಯ ಗೋಪುರದ ಮೇಲೆ ಹೊಸ ಗೋಪುರವನ್ನು ಇತ್ತೀಚೆಗಷ್ಟೆ ನಿರ್ಮಿಸಿದ್ದಾರೆ. ದೇವಸ್ಥಾನದ ಈಶಾನ್ಯ ದಿಕ್ಕಿನಲ್ಲಿ ಪುಶ್ಕರಣಿಯಿದೆ. 



The author with daughter-in-law









ಪ್ರಶಾಂತವಾದ ವಾತಾವರಣವಿರುವ ಇಂತಹ ಸುಂದರ ಸ್ಥಳವನ್ನು ದರ್ಶಿಸಿದ ನಾವೇ ಧನ್ಯರು ಎಂದುಕೊಂಡೆವು.  

ದರ್ಶನದ ಸಮಯ: ಬೆಳಗ್ಗೆ - ೮:೦೦ - ೧೧:೦೦ 
                    ಹಾಗು ಸಂಜೆ: ೫:೩೦ - ೮:೩೦